May 19, 2012

ಹೀಗೊಂದು ಕವಿತೆ ...

ಸುಲಭ ಮತ್ತು ಇಷ್ಟ,
ಹಠಮಾರಿ ಪ್ರೇಯಸಿಯನ್ನು  ಸಂತೈಸುವುದು.
ಆದರೆ ಬಲು ಕಷ್ಟ,
ಕೋಪಿಸಿಕೊಂಡ ಪದಗಳನ್ನು ಸಮಾಧಾನಿಸುವುದು!

ಸುಮ್ಮನೆಂದರೆ ಹೇಗೆ ನಂಬುವುದು
ಓದಿದರೆ ನಿಮಗೇ ತಿಳಿಯುವುದು!

ಬಿಳಿಹಾಳೆ ,ಲೇಖನಿ ಹಿಡಿದು ಕೂತಾಗ,
ಯೋಚಿಸಿ,ಕಲ್ಪಿಸಿ ಬರೆಯಲನುವಾದಾಗ,
ನನಗೆ ಪ್ರತಿ ಪದಗಳ ಬೆಲೆ ತಿಳಿಯುವುದು;
ದೂರವೇ ಇರುತ್ತವೆ ಕರೆದಾಗ,
ಪರಿಚಯವಿರದವರಂತೆ!!

ಸ್ವಲ್ಪದಿನ ನಾನೇನೂ ಬರೆದಿಲ್ಲ ನಿಜ,
ಹಾಗೆಂದು ಕೋಪ ಬರುವುದು ಸಹಜ,
ಮುಂದೆ ಹೀಗಾಗದು ದಯಮಾಡಿ ಮನ್ನಿಸಿ;
ಎಂದು ನಾ ಬೇಡಲು ಸುಮ್ಮನಿದ್ದವು,
ಕಿವಿಕೇಳದವರಂತೆ!

ಕಾದೆನು ಸ್ವಲ್ಪ ಕರೆಂಟು ಹೋದ ಕತ್ತಲಲ್ಲಿ,
ಮತ್ತೆ ಪ್ರಯತ್ನಿಸಿದೆ ಮೇಣದ ಬತ್ತಿಯ ಬೆಳಕಿನಲ್ಲಿ,
ಬೆಳಕಿದ್ದರೂ ಸುತ್ತಲೂ ನನ್ನೊಳಗೆ ಕತ್ತಲು.
ಖುಷಿ ಕಸಿದುಕೊಂಡು ಪದಗಳೆಲ್ಲಾ ನಗುತ್ತಿರಲು
ಅಳು ಬಂದಂತಾಯಿತು!

ಎದ್ದೊಮ್ಮೆ ಹೋಗಿ ಕನ್ನಡಿಯ ನೋಡಿದೆ,
ನಿಜವೇ ಇದು,ನನ್ನ ಕಣ್ಣು ಕೆಂಪಾಗಿದೆ.
ಬಲು ಸುಲಭದ ಕೆಲಸ ಎಂದಿದ್ದ ನಾನೇ
ಬರೆಯಲಾರದೆ ಹೋದೆ  ಬೇಕೆನಿಸಿದಾಗ,
ಎಂಥ ವಿಪರ್ಯಾಸ!!

ಸಂತೈಸುವ ಕೆಲಸ ಮುಂದುವರೆಸಿದೆ
ಪದಗಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದೆ.
ನಮ್ಮ ಮರೆಯುವಿಯೇನು?ಉಹುಂ ಇಲ್ಲ,
ಅಹಂ ಇದೆಯೇನು?ಉಹುಂ ಇಲ್ಲ,
ಹೀಗೆ..ಸಾಗಿತ್ತು!

ಹಾಗೂ ಹೀಗೂ ಪದಗಳಿಗೆ ಸಮಾಧಾನವಾಯ್ತು,
ನನ್ನ ಸೋಮಾರಿತನದ ಪರಮಾವಧಿಗೆ ಶಿಕ್ಷೆಯಾಯ್ತು;
ಲೇಖನಿಗೇಕೆ ಪ್ರಸವ ವೇದನೆ ಎಂದು
ಪದಗಳು ತಾವಾಗಿಯೇ ಬಂದು,
ಕೂತವು ಸಾಲಿನಲ್ಲಿ !

ನಮ್ಮ ಹೆಚ್ಚು ಹೊಗಳದಿರು ಎಂಬ ಮಾತು ಪಡೆದು,
ಒಲವಿನಲಿ ಕರೆದಾಗ ಮತ್ತೆ ಬರುವೆವೆಂದು,
ಕಿವಿ ಹಿಂಡಿ ನುಡಿದವು ಪದಗಳೆಲ್ಲಾ ಒಟ್ಟಿನಲ್ಲಿ,
ಚಿಕ್ಕ ಮಗುವಿನಂತೆ ಎಲ್ಲದಕ್ಕೂ,
ಸರಿಯೆಂದೆ ನಾನು!

ಮೇಣ ಮುಗಿದು ದೀಪ ಆರಿತು,
ಮಧ್ಯ ರಾತ್ರಿ ,ಎಲ್ಲೆಲ್ಲೂ ಕತ್ತಲು,
ನನ್ನೊಳಗೆ ಮಾತ್ರ ಬೆಳಕು!





ಚಿತ್ರ ಕೃಪೆ: www.flickr.com







 
-----------------------------------------------------------------------------------------------

8 comments:

Sudheer Prabhu said...

good writing bro...really liked it..u have full control over the words..remembering the discussion between us in col life

Saakshi Naveen said...

ಚೆನ್ನಾಗಿದೆ.ಹೀಗೆಯೇ ಬರೆಯುತ್ತಿರಿ.

N said...

ತುಂಬಾ ಚೆನ್ನಾಗಿದೆ ಕವನ.. ಶುಭವಾಗಲಿ ವಿನೋದ್..

N said...

ತುಂಬಾ ಚೆನ್ನಾಗಿದೆ ಕವನ.. ಶುಭವಾಗಲಿ ವಿನೋದ್..

Vinod Rai Karmai said...

@suddeer :Thumbaa thanks :-)

Vinod Rai Karmai said...

@saakshi : ಧನ್ಯವಾದಗಳು :-)

Vinod Rai Karmai said...

ನಟರಾಜು ಅವರೇ , ಕವಿತೆ ಓದಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು :-)

Anonymous said...

good one dost.i like it.