Aug 15, 2012

ಸ್ವಗತ -2

ಮತ್ತೊಂದು ಆಗಸ್ಟ್ ಹದಿನೈದು ... ಅಗೋ ಎಷ್ಟೊಂದು ಸಮಸ್ಯೆಗಳು ಇನ್ನು ಹಾಗೇ ಇವೆ...ಈಗ ಅರುವತ್ತಾರನೆಯ ಆಚರಣೆ...
ಭಾಷಣಕ್ಕೆ ಮೀಸಲಾದ ದಿನವಿದೇನೋ?...ಸಮಸ್ಯೆಗಳ ಕುರಿತು ಸಾವಿರ ಮಾತು....ಅಷ್ಟೇ ,ಮತ್ತೇನೂ ಇಲ್ಲ...ವಾಕ್ಚಾತುರ್ಯಕ್ಕೆ ಇಲ್ಲಿ ಬರವಿಲ್ಲ..ನುಡಿಯುವುದು ಮಾತ್ರ,ನಡೆಯಲ್ಲೇನೂ ಇಲ್ಲ!
ಇಲ್ಲಿ ರಾಜಕೀಯ ಬಣ್ಣ ಪಡೆವ ಹೋರಾಟಗಳು...ಜನಸೇವೆಯ ಮುಖವಾಡದ ಹೆಗ್ಗಣಗಳು...ಲೆಕ್ಕವಿಲ್ಲದಷ್ಟು ಪಕ್ಷಗಳು...ಬ್ಯುಸಿನೆಸ್ಸ್ ಆದ  ಆಡಳಿತ..ಸ್ವಜಾತಿ ಪ್ರೇಮಿಯ ಬಾಯಲ್ಲಿ ಜಾತ್ಯಾತೀತ ಜಪ!
ವರುಷಕ್ಕೊಮ್ಮೆ ಧ್ವಜ ಹಾರಿಸಿ,ಯಾರೋ ಬರೆದ ಭಾಷಣ ಓದುವ ಮಂತ್ರಿಗಳು..ಗೊಂದಲದ ಮತದಾರ!
ಕಿರಿಯರ ಶಾಲೆಗಳಲ್ಲಿ ಧ್ವಜ ಹಾರಿಸಿ ಸಂಭ್ರಮ..ಮಿಠಾಯಿ ಹಂಚಿ ಬಾಯಿ ಸಿಹಿ ಮಾಡಿ...ಭಾಷಣ,ನಾಟಕ,ಹಾಡು ಕಾರ್ಯಕ್ರಮ ದೇಶಪ್ರೇಮ ಉಕ್ಕಿಸುವ ಕೆಲಸ..
ಕಾಲೇಜು ಕಛೇರಿಗಳಿಗೆ ರಜೆ..ಅಲ್ಲಿಲ್ಲಿ ಸುತ್ತಾಟ,ಚಾರಣ,ಸಿನಿಮಾ ಮೋಜು, ಮಸ್ತಿ ಮಜಾ..ಎಲ್ಲಾ ಕೆಲಸದಿಂದ ವಿರಾಮ!
ಮಿತಿ ಮೀರಿದ ಭ್ರಷ್ಟಾಚಾರ...ಮರಿ ಹಾಕುತ್ತಿರುವ ಕಪ್ಪು ಹಣ...ಏನೇ ಆದರೂ ನೋಟಿನಲ್ಲಿ ನಗುತ್ತಿರುವ ಅಹಿಂಸಾವಾದಿ!!
ಯಾವುದೇ ವೈಯಕ್ತಿಕ ಆಸೆಗಳಿಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಪ್ರಾಣತೆತ್ತ ಹುತಾತ್ಮರ ನೆನೆಯಬೇಕಾದ ದಿನದಂದು ಪ್ರತಿ ವರ್ಷ ನಾವು ಸಮಸ್ಯೆಗಳ ಬಗ್ಗೆ ಮಾತಾಡಬೇಕಾದ ದುಸ್ತಿತಿ!
ಹೀಗೆಯೇ ಯೋಚಿಸುತ್ತಾ ಹೇಳುತ್ತಿರುತ್ತೇವೆ "ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳು"!!

 ಚಿತ್ರ ಕೃಪೆ:http://jaipursightseeing.com  
---------------------------------------------------------------------------------------------------------------------------------------------------------------

No comments: