Jun 23, 2012

ಕವಿಯಾಗಲು..

ಪದಗಳ್ಯಾವುದೂ ಎಂದಿಗೂ ಯಾರದ್ದೋ ಸ್ವಂತಾಸ್ತಿ ಅಲ್ಲ,
ಶೈಲಿಯನುಕರಣೆ ತಪ್ಪಲ್ಲ!
ಯೋಚಿಸಿ ಯೋಜಿಸಿ ಬರೆಯಬೇಕು,ಕೃತಿ ಚೌರ್ಯ ಸಲ್ಲ;  
ಕದ್ದವನೆಂದೂ  ಕವಿಯಾಗಲ್ಲ!

ಬೆದರಿ ಬೆಳಕಿಗೆ,
ಕತ್ತಲಲ್ಲೇ ಕಳ್ಳನ ಬರವಣಿಗೆ!
ಅಲ್ಲೇ ಇರುವುದದು ,
ಬೆಳಕಿನಲಿ ಭೂತಕನ್ನಡಿ ಸುಡುವುದು!

ಭಾವನೆಗಳು ಬೇಕು,
ಧಾವಿಸಿ ಅವುಗಳನನುಸರಿಸಬೇಕು!
ಕಲ್ಪನೆ ಇರಬೇಕು,
ಕೊಂಚ ಅಂತೆಯೇ ಬರೆಯಬೇಕು!

ಸ್ವಂತಿಕೆಯಿರಬೇಕು,
ಕಾವ್ಯ ಶೀಮಂತಿಕೆಯಿರಬೇಕು!
ಮಂತ್ರಿಸುವುದದು,
ಒಮ್ಮೆ ಓದಿರೆಂದು ಆಮಂತ್ರಿಸುವುದದು!
--------------------------------------------------------------------------------------------------------------------------
 ಕನ್ನಡ ಬ್ಲಾಗ್ ಪುಟದಲ್ಲಿ..(comments @KANNADA BLOG- facebook page)... 

1 comment:

Saakshi Naveen s said...

ಕವನ ಚೆನ್ನಾಗಿದೆ.