ಪ್ರೇಮವಂಚಿತ ಹುಡುಗಿ ,ವಿಧಿಯನ್ನು ಶಪಿಸುತ್ತಾ ಹೇಳಿದ ಅವಳ ಜೀವನದ ಕಥೆಯ ಕವನವಿದು!
--------------------------------------------------------------------------------------------
ಮೃದುಲ ಹೃದಯದ ಮೇಲೆ,ಚೂಪಾದ ಉಗುರಿನ ಗೀರು,
ಹುಚ್ಚು ಪ್ರೀತಿಯಿಂದ;
ಮಾಸದ ಗಾಯದ ಮೇಲೆ, ಸುರಿದಂತೆ ಉಪ್ಪಿನ ನೀರು..
ನೆನಪ ನೋವಿನಿಂದ! ||ಪ||
ವಿಷಗಾಳಿಯ ಉಸಿರಾಟ,
ಧರೆಗುರುಳಿ ಧಗಧಗನೆ,
ಹೊತ್ತಿ ಉರಿಯುತಿದೆ ಕನಸ ಗೋಪುರ.
ಒಂದೆಂಬ ಬಂಧವನು ವಿಧಿ ಹಾಳುಮಾಡಿ,
ರಮಿಸುತಿದೆ ಕಣ್ಣೀರಿನಲ್ಲೇ ಸ್ನಾನ ಮಾಡಿ! || ೧||
ವಿಷಮ ಪ್ರೀತಿಯಾಟ,
ಮರುಕದಲಿ ಮನಸಿನಲಿ,
ತುಂಬಿ ಹರಿಯುತಿದೆ ದುಃಖದ ಸಾಗರ.
ಶೋಕಲೋಕದಲ್ಲಿ ಏಕಾಂಗಿ ಪಯಣ,
ದಾರುಣ ಕೊನೆಯ ಕಥೆಯಿದು ಜೀವನ! ||೨||
ಚಿತ್ರ ಕೃಪೆ :www.wallpaperhere.com
-------------------------------------------------------------------------------------------------------
--------------------------------------------------------------------------------------------
ಮೃದುಲ ಹೃದಯದ ಮೇಲೆ,ಚೂಪಾದ ಉಗುರಿನ ಗೀರು,
ಹುಚ್ಚು ಪ್ರೀತಿಯಿಂದ;
ಮಾಸದ ಗಾಯದ ಮೇಲೆ, ಸುರಿದಂತೆ ಉಪ್ಪಿನ ನೀರು..
ನೆನಪ ನೋವಿನಿಂದ! ||ಪ||
ವಿಷಗಾಳಿಯ ಉಸಿರಾಟ,
ಧರೆಗುರುಳಿ ಧಗಧಗನೆ,
ಹೊತ್ತಿ ಉರಿಯುತಿದೆ ಕನಸ ಗೋಪುರ.
ಒಂದೆಂಬ ಬಂಧವನು ವಿಧಿ ಹಾಳುಮಾಡಿ,
ರಮಿಸುತಿದೆ ಕಣ್ಣೀರಿನಲ್ಲೇ ಸ್ನಾನ ಮಾಡಿ! || ೧||
ವಿಷಮ ಪ್ರೀತಿಯಾಟ,
ಮರುಕದಲಿ ಮನಸಿನಲಿ,
ತುಂಬಿ ಹರಿಯುತಿದೆ ದುಃಖದ ಸಾಗರ.
ಶೋಕಲೋಕದಲ್ಲಿ ಏಕಾಂಗಿ ಪಯಣ,
ದಾರುಣ ಕೊನೆಯ ಕಥೆಯಿದು ಜೀವನ! ||೨||
ಚಿತ್ರ ಕೃಪೆ :www.wallpaperhere.com
-------------------------------------------------------------------------------------------------------
2 comments:
ವಿಷಾದ ಭಾವ! ಒಲವ ತುಡಿತಗಳು ಕೆಲವೊಮ್ಮೆ ಯಾವುದೋ ಕಟ್ಟುಪಾಡಿನ ಹಿಡಿತಕ್ಕೆ ಸಿಕ್ಕಿ ದಾರುಣ ಅಂತ್ಯ ಕಂಡಿದ್ದನ್ನು ಕೇಳಿದ್ದೇನೆ. ನೋಡಿದ್ದೇನೆ. ನಿಜವಾಗಿಯೂ ಅದು ದಾರುಣವೇ.
ಆ ದಾರುಣಕೆ ಸನ್ನಿವೇಶಕ್ಕೆ ಪದ ಕಟ್ಟುವಲ್ಲಿ ನೀವು ಸಫಲ. ಒಳ್ಳೆ ಪ್ರಯತ್ನ.
ಧನ್ಯವಾದಗಳು....ಕೆಲವು ಕಟ್ಟುಪಾಡು,ಧೋರಣೆಗಳು ಬದಲಾದರೆ ಇಂತಹ ದಾರುಣ ಕಥೆಗಳೂ ಕಡಿಮೆಯಾಗಬಹುದು ಅಲ್ವಾ ಸರ್ ?
Post a Comment